News & Events
Preparation and decoration by the local devotees for the Annual Festival
ಅನಂತಪುರ, 24-02-2025 ಕೇರಳದ ಏಕೈಕ ಸರೋವರ ಕ್ಷೇತ್ರವೆಂದೇ ಪ್ರಖ್ಯಾತವಾದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಕುಂಭ ಮಾಸ 14 ರಂದು (ದಿನಾಂಕ: 26-02-2025, ಬುಧವಾರ) ಏಕದಿನ ವಾರ್ಷಿಕ ಮಹೋತ್ಸವ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಬಹಳ ವಿಸ್ತಾರವಾಗಿರುವ ಕ್ಷೇತ್ರ ಪರಿಸರವನ್ನು, ಸರೋವರ ತಟವನ್ನು ಶುಚಿಗೊಳಿಸುವ ಹಾಗೂ ದೇವಾಲಯ ಪರಿಸರವನ್ನು ಬ್ಯಾನರ್, ಬಂಟಿಂಗ್ಸ್, ತಳಿರು ತೋರಣಗಳಿಂದ ಅಲಂಕರಿಸುವ ಕೆಲಸವು ಶ್ರೀ ಕ್ಷೇತ್ರದ ಉತ್ಸವ ಸಮಿತಿಯ ನೇತೃತ್ವದಲ್ಲಿ ಭರದಿಂದ ನಡೆಯುತ್ತಿದೆ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಜನಾರ್ಧನ ಕಣ್ಣೂರು, ಶ್ರೀ
Vedavardhana Teertha Swamiji of Shiroor Matha visited Ananthapura Temple
ಅನಂತಪುರ, 18-12-2024 ಉಡುಪಿ ಅಷ್ಟಮಠಗಳಲ್ಲೊಂದಾದ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರ 2026ರ ಪ್ರಥಮ ಪರ್ಯಾಯ ಪೂರ್ವಭಾವಿ ಸಂಚಾರದ ಪ್ರಯುಕ್ತ ಕೇರಳದ ಏಕೈಕ ಸರೋವರ ಕ್ಷೇತ್ರವೆಂದೇ ಖ್ಯಾತವಾದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಕ್ಕೆ ಇಂದು ಭೇಟಿ ನೀಡಿದರು. ಶ್ರೀದೇವಿ, ಭೂದೇವಿ ಸಹಿತ ಶ್ರೀ ಅನಂತಪದ್ಮನಾಭ ಸ್ವಾಮಿಯ ದರ್ಶನ ಪಡೆದ ಶ್ರೀಗಳು ಮುಂಬರುವ ಜೀರ್ಣೋದ್ಧಾರ ಯೋಜನೆಗಳ ಕುರಿತು ಮಾಹಿತಿ ಪಡೆದರು. ತಮ್ಮ ಮುಂಬರುವ ಪರ್ಯಾಯ ಪೀಠಾರೋಹಣ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರದ ಸಮಸ್ತರನ್ನೂ ಆಮಂತ್ರಿಸಿದರು. ಜೀರ್ಣೋದ್ಧಾರ